ಕ್ರೈಸ್ತನ ನಿಷ್ಕ್ರಮಣ

ಕ್ರೈಸ್ತನ ನಿಷ್ಕ್ರಮಣ

ಚಿತ್ರ: ಕಾಯ್ ಕಲ್ಹ

ಮತ್ತೊಮ್ಮೆ ಹುಟ್ಟಿ ಬರಲೆ?
ಮತ್ತೊಮ್ಮೆ ಹುಟ್ಟಿ ಬರಲೆ?
– ಎಂದು ಕತ್ತಲಿನಿಂದ
ಕೇಳಿ ಬರುತಿದೆ ನಿನ್ನ ಧ್ವನಿ.

ಮತ್ತೊಮ್ಮೆ ನೀ ಬಂದರೆ
ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು
ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು
ಹುಚ್ಚನೆಂದು ಆಸ್ಪತ್ರೆಯಲಿ ಹಾಕಿ ಕೊಂದೇವು

ನಾವು ಕಟ್ಟಿದ ಗುಡಿಗೋಪುರ ಸಂಸ್ಥೆಗಳ
ಅಡಿಗಲ್ಲು ಅಲುಗಿಸಬೇಡ
ಅಲ್ಲಿ ಕಳೆಹುಲ್ಲು ಬೆಳೆದರೂ
ಹಾವಸೆಯೆ ಹತ್ತಿದರೂ
ಹಾದರವೆ ನಡೆದರೂ
ಅದು ಪವಿತ್ರ ಸ್ಮಾರಕ
ಅಲುಗಿಸಬೇಡ
ಕುರುಡು ಸಾಮ್ಸನನ ಹಾಗೆ
ನಿನ್ನೊಡನೆ ನಮ್ಮ ಕೊಲಬೇಡ
ಓ ಕ್ರೈಸ್ತ,
ಮಾಡು ಅಷ್ಟೊಂದು ಉಪಕಾರ
ಕತ್ತಲೆಯಲೇ ನೀ ಕರಗಿ ಹೋಗು
ಹೋಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು-ಇಂದು
Next post ಶಾರ್ಕ್

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys